ವಿಕಾಸವೆಂಬ ಪಾತಾಳದಲ್ಲಿ. ಆಸೆಯೇ ದುಖಕ್ಕೆ ಮೂಲ ಎಂದಿದ್ದ ಬುದ್ಧ ಸರಳತೆಯಲಿ ಬದುಕನ್ನೇ ಗೆದ್ದು ತೆರೆದಿಟ್ಟಿದ್ದ ವೈಭೋಗ ಬದುಕು ನಿಷಿದ್ದ, ತನ್ನದೇ ಮುಕ್ತ ಇರುವಿನಲಿ ಜೀವನ ಸಮೃದ್ಧ ಮುಗುಳುನಗೆಯ ವಶೀಕರಣದಲಿ ನಮ್ಮನ್ನೇ ಕದ್ದ ಯುದ್ಧ ತ್ಯಜಿಸಿದ ಯೋಧ ಅಹಿಂಸೆ ಮಹಾ ಅಸ್ತ್ರದಲಿ ಇಂದಿಗೂ ಸದಾ ಸಿಧ್ದ "ಆಸೆಯೇ ಅನ್ವೇಷಣೆಯ ಬೇರು, ಅವಶ್ಯಕತೆಯೇ ಆವಿಶ್ಕಾರಗಳ ಮೂಲ" ಪ್ರಗತಿಪರ ಸಿದ್ಧಾಂತಿಗಳು, ಜಪಿಸುವ ಜಗದ ಮಂತ್ರ ಇಂದು ಮನುಕುಲ ಸೀಮಿತ ತಂತ್ರವೇ ಅವನತಿಯ ಶೂಲ ಅವಿಶ್ಕಾರಗಳ ಅಡಿಪಾಯ ಸದಾ ಕುತೂಹಲ ಅನ್ವಯ, ಬಳಕೆ, ಮಾತ್ರ ಬಲಶಾಲಿಗಳ ಪಾಲು ನೀನೊಬ್ಬ ಶೋಷಿತ, ಬಡವನಲ್ಲದ ಭ್ರಮೆಯಲ್ಲೇ ಖುಷಿ ನೀನಾಗಲಾರೆ ಸಮಬಾಳ್ವೆಯ ಋಷಿ ಆತ್ಯಾಧುನಿಕ, ಸುಸಜ್ಜಿತ, ಆರಾಮದಾಯಕ ವೈಭವದ ಕನಸಿಗೆ, ಧ್ಯೇಯ ಬದುಕಿನ ಸರಕು, ಕೈಗೆಟುವ ಮಾಯಲೋಕದಲ್ಲಿ ಮೋಜು, ಮಸ್ತಿ, ಮನರಂಜನೆಯಲಿ ಮಗ್ನನಾಗು ಮಾದಕತೆಯ ನಶೆ ಬಲು ಮಜಾ, ನಿಜ ಮತ್ತಿಳಿದು, ಭ್ರಮನಿರಸನ, ಮತ್ತೆ ಮರುಳುವ ಮಾಯಲೋಕದ ಅಥಿತಿ ತಿಳಿದಿಲ್ಲ ನಿನಗೆ ಯಾವಾಗ ನಿನ್ನ ತಿಥಿ ನೀನೊಬ್ಬ ಸ್ವತಂತ್ರ ಗುಲಾಮ. ಅನುಭವಿಸು ಕಳೆದುಹೋಗುವವರೆಗೂ, ಪ್ರಜ್ಞಾಹೀನ ಸ್ಥಿತಿಯಲ್ಲೇ ಇರಲಿ ನಿನ್ನ ಸಮಾದಿ ಎಚ್ಚರಕೆ ಮರುಳದ ಮಾದಕದ ಕನಸಲ್ಲಿ ಲುಪ್ತನಾಗಿಯೇ ಇರು, ಶಾಶ್ವತ ಮಂಪರಿನಲ್ಲಿ ಸತ್ತ ನೆನ್ನೆಗಳು, ಹುಟ್ಟದ ನಾಳೆಗಳು ಈ ಕ್ಷಣದ ಪ್ರತಿಕ್ರಿಯೆಯ ಇರುವು ಬದುಕಲ್ಲ ಕ್ಷಣದ ಸರಳತೆಯ ಸತ್ಯದ ತಡಕಾಟದಲ್ಲೇ ಬದುಕು ನೀತಿಯೇ, ಆದರ್ಷವೇ
"ಸವನಾಲು ಬಸದಿ" ಇದೇ ಸೆಪ್ಟಂಬರ್ ತಿಂಗಳ ಮೊದಲ ವಾರದಲ್ಲಿ ಇಲ್ಲೇ ಸಮೀಪದಲ್ಲಿರುವ ಅಷ್ಟಾಗಿ ಪ್ರಸಿಧ್ದಿಇಲ್ಲದ, ಬೆಟ್ಟದಬುಡದ ಹಸಿರುಕಾಡಲ್ಲಿ, ಎತ್ತರದ ಮರಗಳ ನೆರೆಳಿಲ್ಲಿರುವ ಒಂದು ಜೈನ ಬಸದಿ ಅದರ ಪರಿಸರ ಆಕರ್ಷಣೀಯವಾಗಿದೆ. ಯಾರಿಗೂ ನಿರಾಸೆ ಮಾಡುವುದಿಲ್ಲ ಈ ಸುಂದರ ತಾಣ. ಎಲ್ಲರೂ ನೋಡಬಹುದೆಂದು ನಮ್ಮ ಸ್ನೇಹಿತರೊಬ್ಬರು ಹೇಳಿದಾಗ....ತಿಂಗಳು ಗಟ್ಟಲೆ ಎಲ್ಲೂ ಹೋಗದೆ ಮನೆಯಲ್ಲೇ ಇದ್ದು ಸಾಕಾಗಿ ಕಾಯುತ್ತಿದ್ದ ನನಗೆ ಪ್ರಯತ್ನಪಡಬಹುದೆಂದು ಅನಿಸಿತು. ವಿರಳ ಜನಸಂದಣಿ ಇರುವ.....ಅತಿ ಚಿಕ್ಕದಾರಿ ಕಾಡು, ಆಡಿಕೆ, ಬಾಳೆ ತೋಟಗಳ ನಡುವೆ ಸಣ್ಣರಸ್ತೆಯಲ್ಲಿ ಒಂದು ಕಾರ್ ಮಾತ್ರ ಹೋಗಲು ಇರುವ ದಾರಿ. ಎರಡು, ಮೂರು ಕಿ.ಮಿ ಒಳಗೆಹೋಗುವಾಗ ನಿರ್ಜನರಸ್ತೆಗಳು. ಅಲ್ಲೊಂದು ಸೇತುವೆ ಇದೆ. ಆ ಸೇತುವೆಯಲ್ಲಿ ಸಣ್ಣ ಕಾರಿನ ಪಕ್ಕದ ಕನ್ನಡಿಗಳನ್ನೂ ಸಹಾ ಒಳಗೆಳೆದುಕೊಂಡು ಮಾತ್ರ ಹೋಗಬಹುದಾದ, ಸ್ವಲ್ಪ ಹೆದರಿಕೆ ಹುಟ್ಟಿಸುವ ಸೇತುವೆ. ನನ್ನಂತ ಅನುಭವವಿಲ್ಲದ ಹೊಸ ಚಾಲಕರಿಗೆ ನಿಜವಾದ ಸವಾಲು. ಸ್ಟೇರಿಂಗ್ ಕೊಂಚ ಯಾಮಾರಿದರು ಹೊಸಕಾರ್ ಉಜ್ಜಿಕೊಂಡುಹೋಗುವುದು ಖಾತ್ರಿ ಸೇತುವೆಯ ಕಬ್ಬಿಣದ ಕಂಬಿಗಳಿಗೆ. ಕೆಣಕಿದ ಹಾಗೆ ಅನಿಸಿ ನೋಡೋಣ ಪ್ರಯತ್ನ ಪಡೋಣ, ತೀರಾ ಆಗದಿದ್ದರೆ ಗಾಡಿಯನ್ನು ಅಲ್ಲೇ ನಿಲ್ಲಿಸಿ ನಡೆದುಕೊಂಡೇ ಹೋಗುವುದೆಂದು ನಿರ್ಧರಿಸಿ ಹೊರಟೆವು ಮೂರು ಮಂದಿ. ನನ್ನ ತಮ್ಮನ ಮಗ ಪ್ರತೀಕ್ ಜೋಡಿದಾರ್, ಲಕ್ಷ್ಮಿಯ ತಮ್ಮನ ಮಗಳು ಅರ್ಪಿತಾ ಶಾಮಪ್ರಸಾದ್